Runa Vimochana Narasimha Stotram | ಋಣ ವಿಮೋಚನ ನೃಸಿಂಹ ಸ್ತೋತ್ರಂ

ಋಣ ವಿಮೋಚನ ನೃಸಿಂಹ ಸ್ತೋತ್ರಂ: ಸಾಲದಿಂದ ಮುಕ್ತಿ ನೀಡುವ ಶಕ್ತಿಶಾಲಿ ಸ್ತೋತ್ರ

Runa Vimochana Narasimha Stotram Kan

ವಿಷ್ಣುವಿನ (Vishnu) ದಶಾವತಾರಗಳಲ್ಲಿ ಅತ್ಯಂತ ಶಕ್ತಿಶಾಲಿ ಅವತಾರಗಳಲ್ಲಿ ಒಬ್ಬರಾದ ನರಸಿಂಹ ಸ್ವಾಮಿಯ ಅವತಾರ. ಋಣ ವಿಮೋಚನ ನರಸಿಂಹ ಸ್ತೋತ್ರದ (Runa Vimochana Narasimha Stotram) ಮೂಲಕ ಭಕ್ತರೆಲ್ಲರನ್ನು ಜೀವನದ ಪ್ರತಿಕೂಲ ಅಂಶಗಳಿಂದ ರಕ್ಷಿಸಲು ಉಗ್ರ ಸ್ವರೂಪಿಯಾಗಿ ಪ್ರಸಿದ್ಧನಾಗಿದ್ದಾನೆ. ಕೆಟ್ಟದ್ದರ ಮೇಲೆ ಒಳ್ಳೆಯದು ಸಾಧಿಸಿದ ವಿಜಯದ ಸ್ವರೂಪವಾಗಿ ಆತನನ್ನು ಪರಿಗಣಿಸಲಾಗುತ್ತದೆ. ರಾಕ್ಷಸ ರಾಜ ಹಿರಣ್ಯಕಶಿಪುವನ್ನು (Hiranya Kashyap) ನಾಶಮಾಡಲು ನರಸಿಂಹ ಸ್ವಾಮಿ (Narasimha Swamy) ಅವತಾರದಲ್ಲಿ ಅವತರಿಸಿದನೆಂದು ಪುರಾಣಗಳಲ್ಲಿ ಹೇಳಲಾಗಿದೆ.

ನರಸಿಂಹ ಸ್ವಾಮಿ – ಅವತಾರ ಮತ್ತು ಮಹತ್ವ

ನರಸಿಂಹ ಸ್ವಾಮಿ (Narasimha Swamy) ಅರ್ಧ ಮನುಷ್ಯ ಮತ್ತು ಅರ್ಧ ಸಿಂಹ ರೂಪವನ್ನು ಹೊಂದಿರುತ್ತಾರೆ. ನರಸಿಂಹ ಸ್ವಾಮಿಯವರ ಮುಂಡ ಮತ್ತು ಕೆಳಗಿನ ದೇಹವು ಮನುಷ್ಯನದು ಮತ್ತು ಮುಖ, ಉಗುರುಗಳು (ನಖಗಳು) ಕ್ರೂರವಾದ ಸಿಂಹದ್ದು. ದೇಹ ರೂಪಗಳೊಂದಿಗೆ ಸೇರಿ, ನರಸಿಂಹ ಭಗವಾನನನ್ನು ವಿವಿಧ ರೂಪಗಳಲ್ಲಿ ವರ್ಣಿಸಲಾಗಿದೆ. ಮತ್ತು ವಿವಿಧ ಭಂಗಿಗಳು ಮತ್ತು ಆತನ ಕೈಯಲ್ಲಿ ಹಿಡಿದಿರುವ ಆಯುಧಗಳಿಗೆ ಸಂಬಂಧಿಸಿದಂತೆ ಸುಮಾರು 74 ಕ್ಕೂ ಹೆಚ್ಚು ರೂಪಗಳನ್ನು ಹೊಂದಿರುತ್ತಾನೆ ಎಂದು ಹೇಳುತ್ತಾರೆ. ಮುಖ್ಯವಾದವುಗಳನ್ನು ಒಟ್ಟಾಗಿ ನವ-ನರಸಿಂಹ ಎಂದು ಕರೆಯಲಾಗುತ್ತದೆ.

ನರಸಿಂಹ ಮಂತ್ರ – ಶಕ್ತಿ ಮತ್ತು ಪ್ರಯೋಜನಗಳು

ನರಸಿಂಹ ಮಂತ್ರ (Narasimha Mantra) ಎಂದರೆ, ಅಗ್ನಿಯಂತೆ ಪ್ರಕಾಶಮಾನವಾಗಿ ಮತ್ತು ಉಗ್ರರೂಪದಿಂದ ಇರುವ ನರಸಿಂಹ ಸ್ವಾಮಿಯ ಭಯಾನಕ, ದಿವ್ಯ ಮತ್ತು ಧೈರ್ಯ ಸ್ವರೂಪಕ್ಕೆ ನಮಸ್ಕರಿಸುತ್ತಾ ಪಠಿಸುವ ಮಂತ್ರ. ನರಸಿಂಹ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಬಾಧೆಗಳು ತೊಲಗಿ ಜನರ ಕಷ್ಟಗಳು ದೂರವಾಗುತ್ತವೆ. ಇದು ನಿರ್ಭಯ ಸ್ಥಿತಿ, ಶಾಂತಿ, ಶ್ರೇಯಸ್ಸು ಮತ್ತು ಪ್ರಶಾಂತತೆಯನ್ನು ನೀಡಬಲ್ಲದು.

ಮಹತ್ವ ಮತ್ತು ಪ್ರಯೋಜನಗಳು

ಪುರಾಣಗಳ ಪ್ರಕಾರ ಋಣ ವಿಮೋಚನ ನರಸಿಂಹ ಸ್ತೋತ್ರವು (Runa Vimochana Narasimha Stotram) ಒಂದು ಶಕ್ತಿಶಾಲಿ ಮಂತ್ರ. ಇದು ತೀವ್ರವಾದ ಆರ್ಥಿಕ ತೊಂದರೆಗಳು ಮತ್ತು ಸಾಲಗಳಿಂದ ಹೊರಬರಲು ಅನೇಕರು ಪಠಿಸುತ್ತಾರೆ. ಇದು ಪೂರ್ವಜರ, ದೈಹಿಕ, ಸಂಬಂಧ, ಹಣಕಾಸು ಮತ್ತು ಜ್ಞಾನದ ಸಾಲಗಳನ್ನು ಪರಿಹರಿಸಬಲ್ಲದು. ಋಣ ವಿಮೋಚನ ಲಕ್ಷ್ಮೀ ನರಸಿಂಹ ಸ್ತೋತ್ರವನ್ನು 108 ಬಾರಿ ಜಪಿಸುವುದರಿಂದ ಸಾಲ ಮುಕ್ತಿಯಾಗುತ್ತದೆ ಎಂಬ ಪ್ರತೀತಿ ಇದೆ.”

ಋಣ ವಿಮೋಚನ ನೃಸಿಂಹ ಸ್ತೋತ್ರಂ

ಧ್ಯಾನಂ –
ವಾಗೀಶಾ ಯಸ್ಯ ವದನೇ ಲಕ್ಷ್ಮೀರ್ಯಸ್ಯ ಚ ವಕ್ಷಸಿ ।
ಯಸ್ಯಾಸ್ತೇ ಹೃದಯೇ ಸಂವಿತ್ತಂ ನೃಸಿಂಹಮಹಂ ಭಜೇ ॥

ಅಥ ಸ್ತೋತ್ರಂ –
ದೇವತಾಕಾರ್ಯಸಿದ್ಧ್ಯರ್ಥಂ ಸಭಾಸ್ತಂಭಸಮುದ್ಭವಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 1 ॥

ಲಕ್ಷ್ಮ್ಯಾಲಿಂಗಿತ ವಾಮಾಂಕಂ ಭಕ್ತಾನಾಂ ವರದಾಯಕಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 2 ॥

ಆಂತ್ರಮಾಲಾಧರಂ ಶಂಖಚಕ್ರಾಬ್ಜಾಯುಧಧಾರಿಣಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 3 ॥

ಸ್ಮರಣಾತ್ ಸರ್ವಪಾಪಘ್ನಂ ಕದ್ರೂಜವಿಷನಾಶನಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 4 ॥

ಸಿಂಹನಾದೇನ ಮಹತಾ ದಿಗ್ವಿದಿಗ್ಭಯನಾಶನಮ್ । [ದಿಗ್ದಂತಿ]
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 5 ॥

ಪ್ರಹ್ಲಾದವರದ ಶ್ರೀಶಂ ದೈತ್ಯೇಶ್ವರವಿದಾರಣಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 6 ॥

ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಮಭಯಪ್ರದಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 7 ॥

ವೇದವೇದಾಂತಯಜ್ಞೇಶಂ ಬ್ರಹ್ಮರುದ್ರಾದಿವಂದಿತಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 8 ॥

ಇತ್ಥಂ ಯಃ ಪಠತೇ ನಿತ್ಯಂ ಋಣಮೋಚನ ಸಿದ್ಧಯೇ । [ಸಂಜ್ಞಿತಂ]
ಅನೃಣೋ ಜಾಯತೇ ಶೀಘ್ರಂ ಧನಂ ವಿಪುಲಮಾಪ್ನುಯಾತ್ ॥ 9 ॥

ಸರ್ವಸಿದ್ಧಿಪ್ರದಂ ನೃಣಾಂ ಸರ್ವೈಶ್ವರ್ಯಪ್ರದಾಯಕಮ್ ।
ತಸ್ಮಾತ್ ಸರ್ವಪ್ರಯತ್ನೇನ ಪಠೇತ್ ಸ್ತೋತ್ರಮಿದಂ ಸದಾ ॥ 10 ॥

ಇತಿ ಶ್ರೀನೃಸಿಂಹಪುರಾಣೇ ಋಣಮೋಚನ ಶ್ರೀ ನೃಸಿಂಹ ಸ್ತೋತ್ರಮ್ ।

Credits: @MantraMahodadhi

Also Read

Leave a Comment